
ಬ್ರೇಕಿಂಗ್ ನ್ಯೂಸ್ ಹಾಗೂ ಫ್ಲ್ಯಾಷ್ ನ್ಯೂಸ್ ನಡುವಿನ ವ್ಯತ್ಯಾಸ ಗೊತ್ತಿಲ್ಲದಿರುವವರು ಆಯಾ ವಿಭಾಗಗಳ ಮುಖ್ಯಸ್ಥರಾಗಿರುವುದರಿಂದಲೇ ಇಂಥಹ ಪ್ರಮಾದಗಳಾಗುತ್ತವೆ. ಸುದ್ದಿಗೆ ಬರ ಅಂಥ ಮುಖ್ಯಸ್ಥರು ಭಾವಿಸುತ್ತಾರೆ. ಆದ್ದರಿಂದಲೇ ಯಡಿಯೂರಪ್ಪ ಪೂಜೆ ಮಾಡಿದ್ದು ಬ್ರೇಕಿಂಗ್ ಆಗುತ್ತದೆ. ಸುದ್ದಿ ಸ್ಫೋಟ ಆಗುತ್ತದೆ. ಸಮೂಹ ಮಾಧ್ಯಮದ ಶಕ್ತಿ ಗೊತ್ತಿಲ್ಲದೇ ಇರುವವರು ನ್ಯೂಸ್ ಛಾನೆಲ್ಗಳಲ್ಲಿ ಹೆಚ್ಚು ಮಂದಿ ಇರುವುದರಿಂಲೇ ಇಂಥಹ ಸುದ್ದಿಗಳನ್ನು ಜನ ಕೇಳಬೇಕಾಗುತ್ತದೆ ಜತೆಗೆ ನೋಡಬೇಕಾಗುತ್ತದೆ. ಯಾವುದು ಸುದ್ದಿ ಅಂಥ ತಿಳಿದುಕೊಳ್ಳಬೇಕಾದರೆ ವರ್ಷಗಟ್ಟಲೆ ಹಿಡಿಯುತ್ತದೆ. ಕಾರಣ ಬಹುತೇಕ ಟಿವಿ ಚಾನೆಲ್ಗಳ ಸುದ್ದಿ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವ ವರದಿಗಾರರು ಹಾಗೂ ಸಂಪಾದಕೀಯ ವಿಭಾಗದವರಿಗೆ ಒಂದು ಬೇಸಿಕ್ ತರಬೇತಿ ಆಗಿರುವುದಿಲ್ಲ. ಬಹುತೇಕ ಎಲ್ಲಾ ನ್ಯೂಸ್ ಪೇಪರ್ಗಳ ಸಂಪಾದಕರು ಹಾಗೂ ನ್ಯೂಸ್ ಚಾನೆಲ್ಗಳ ಮುಖ್ಯಸ್ಥರು ಮೂಲಭೂತ ವರದಿಗಾರರಾಗಿ ಮೇಲಕ್ಕೆ ಏರಿದ್ದರೆ ಅಥವಾ ಆ ಸ್ಥಾನಕ್ಕೆ ನೇಮಕಗೊಂಡರೆ ಇಂಥಹ ಪ್ರಮಾದಗಳಾಗುವುದನ್ನು ತಡೆಯಬಹುದು. ಆದರೆ ಈಗೆಲ್ಲಾ ಹೈಬ್ರಿಡ್ ಸಂಪಾದಕರೇ. ರಾತ್ರೋರಾತ್ರಿ ಸುದ್ದಿ ಸಂಸ್ಥೆಗಳ ಮುಖ್ಯಸ್ಥರಾಗುತ್ತಾರೆ. ಅಂಥವರಿಗೆ ಸಂಪಾದಕೀಯ ವಿಭಾಗವನ್ನು ಹೇಗೆ ದುಡಿಸಿಕೊಳ್ಳಬೇಕು? ವರದಿಗಾರರ ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದೇ ಗೊತ್ತಿರುವುದಿಲ್ಲ. ಆದ್ದರಿಂದಲೇ ಜಾಳು ಜಾಳಾದ ಹಳಸು ಸುದ್ದಿಗಳನ್ನು, ಸಾರ್ವಜನಿಕ ಹಿತಾಸಕ್ತಿ ಇಲ್ಲದ ವಿಷಯಗಳನ್ನು ಬ್ರೇಕಿಂಗ್ ಮಾಡುತ್ತಲೇ ಇರುತ್ತಾರೆ. ಏಕೆಂದರೆ ಸುದ್ದಿಕೊಡುವವನಿಗೂ ಹಾಕುವವರಿಗೂ ಅದು ಸುದ್ದಿನಾ? ಬ್ರೇಕಿಂಗ್ ಆಗಬಹುದಾ? ಫ್ಲಾಷ್ ನ್ಯೂಸಾ ಅನ್ನುವುದೇ ಗೊತ್ತಿರುವುದಿಲ್ಲ. ಇದರಿಂದ ಬ್ರೇಕಿಂಗ್ ನ್ಯೂಸ್ಗಳ ಹಾವಳಿ ಹೆಚ್ಚಾಗಿದೆ.
ಕನರ್ಾಟಕದ ಟೆಲಿವಿಷನ್ ಇತಿಹಾಸ ಹೆಚ್ಚೆಂದರೆ ಹದಿನೈದು ವರ್ಷದ್ದು. ರಾಮೋಜಿರಾವ್ ಈಟಿವಿ ಶುರುವಾದಾಗ ರಾಮೋಜಿಫಿಲಂ ಸಿಟಿಯಲ್ಲಿ ಕೊಡಿಸಿದ 26 ದಿನಗಳ ತರಬೇತಿಯೇ ರಾಜ್ಯದ ಟೆಲಿವಿಷನ್ ಇತಿಹಾಸದಲ್ಲಿಯೇ ಮೊದಲಿನದು. ಅಲ್ಲಿಯವರೆಗೆ ಇದ್ದ ಉದಯ, ಕಾವೇರಿ ಹಾಗೂ ಸುಪ್ರಭಾತ ಮಾಧ್ಯಮ ಸದಸ್ಯರಿಗೆ ಅಂಥಹ ಟೆಕ್ನಿಕಲ್ ತರಬೇತಿ ಆಗಿರಲಿಲ್ಲ. ಜತೆಗೆ ಸಿಕ್ಕಿದ್ದರೂ ನುರಿತವರಿಂದ ದೊರಕಿದ್ದಲ್ಲ. ಇದು ಬೇಸಿಕ್ ಅಥವಾ ಮೂಲಭೂತ ನ್ಯೂನತೆ. ನಾನು ಹೇಳಿದಂತೆ ನಾವೆಲ್ಲಾ ಈಟಿವಿ ಸೇರಲು ಹೈದ್ರಾಬಾದ್ಗೆ ಹೊರಟು ನಿಂತಾಗ ಹೈದ್ರಾಬಾದ್ಗೆ ಬಂದಿದ್ದವರಲ್ಲಿ ಬಹುತೇಕ ಹೊಸಬರಿದ್ದರು. ಅವರಲ್ಲಿ ಶೇ. 50 ಮಂದಿ ಜರ್ನಲಿಸಂನಲ್ಲಿ ಒಂದು ಬೇಸಿಕ್ ಡಿಗ್ರಿಯನ್ನಾಗಲಿ, ಡಿಪ್ಲೊಮವೊಂದನ್ನಾಗಲಿ ಮಾಡಿದವರಲ್ಲ. ಹೀಗೆ ಹೈದ್ರಾಬಾದ್ಗೆ ಬಂದ ಜನ ಒಂದೆರಡು ವರ್ಷಗಳಲ್ಲಿ ಸಮಾನ ಮನಸ್ಕರು (ಅಥವಾ ಸ್ವಂತ ವ್ಯಕ್ತಿತ್ವ ಇಲ್ಲದವರೆಲ್ಲಾ) ಸೇರಿ ಒಂದು ಗುಂಪುಕಟ್ಟಿಕೊಂಡರು. ಅವರೇ ಮುಂದೆ ದೊಡ್ಡ ಆಂಕರ್ ಗಳಾದರು. ಅವರೇ ಸುದ್ದಿವಿಭಾಗದ ಕೋಆಡರ್ಿನೇಟರ್ಸ್ ಆದರು. ಹೀಗೆ ಬೇಸಿಕ್ ಆದ ತರಬೇತಿ ಪಡೆಯದ, ಒಂದು ದಿನವಾದರೂ ಫೀಲ್ಡಿಗೆ ಹೋಗಿ ವರದಿಮಾಡದ, ಸುದ್ದಿ ಬರೆಯದ ಜನರ ಕೈಗೆ ಸುದ್ದಿ ಮಾಧ್ಯಮವನ್ನು ಮುನ್ನಡೆಸುವ ಹೊಣೆಗಾರಿಕೆ ದೊರೆತರೆ ಇನ್ನೇನಾಗುತ್ತದೆ ಹೇಳಿ. ಈಟಿವಿಗೆ ಜನರನ್ನು ನೇಮಕ ನೇಮಕಮಾಡಿದಾಗ ರಾಮೋಜಿರಾವ್ಗೆ ಆಗಲಿ ನಾರಾಯಣಮೂತರ್ಿ ಅವರಿಗಾಗಲಿ, ರಾಮನುಜಂಗೆ ಆಗಲಿ ಇಲ್ಲಿನ ಜನರ ಪರಿಚಯವಿರಲಿಲ್ಲ. ಅವರಿಗಿದ್ದ ಮ್ಯಾನ್ಡೇಟ್ ಒಂದೇ ಕನರ್ಾಟದಲ್ಲಿ ಚಾನೆಲ್ ಮಾಡಬೇಕು. ಅದ್ಕಕಾಗಿ ಜನರ ನೇಮಕವಾಗಬೇಕು. ಆದ್ದರಿಂದ ಸಿಕ್ಕಸಿಕ್ಕವರನ್ನು ಆ ಚಾನೆಲ್ಗೆ ತುಂಬಿದರು. ಹೀಗೆ ಬಂದ ಜನರೆ ಮುಂದೆ ಟಿವಿ -9, ಸುವಣರ್ಾ, ಸಮಯ, ಜನಶ್ರೀ, ಕಸ್ತೂರಿ ಚಾನೆಲ್ಗಳಲ್ಲಿ ಗುಂಪು ಗುಂಪುಗಳಲ್ಲಿ ಸೇರಿಹೋದರು. ಈಟಿವಿಯಲ್ಲಿ ಕಲಿತದ್ದನ್ನೇ ಮುಂದಿನ ಚಾನೆಲ್ಗಳಲ್ಲಿ ಮಾಡತೊಡಗಿದರು. ಆದ್ದರಿಂದಲೇ ಇಂದು ಎಲ್ಲಾ ಚಾನೆಲ್ಗಳಲ್ಲಿ ಒಂದೊಂದು ಗುಂಪುಗಳು. ಆ ಗುಂಪಿಗೆ ಸೆಲ್ಯೂಟ್ ಹೊಡೆದರೆ ಮಾತ್ರ ಆ ಟಿವಿಗಳಿಗೆ ಸೇರ್ಪಡೆ. ಇಲ್ಲದಿದ್ದರೆ ನೀವೇಷ್ಟೇ ಪ್ರತಿಭಾವಂತರಾಗಿದ್ದರೂ ನಿಮಗೆ ಅವಕಾಶವಿಲ್ಲ. ಇದನ್ನು ಹೊಸ ಪತ್ರಿಗೆಗಳಿಗೂ ಅನ್ವಯಿಸಬಹುದು.
ಹೀಗೆ 12 ವರ್ಷಗಳ ಹಿಂದೆ ಆದ ಒಂದು ಪ್ರಮಾದ ಕನರ್ಾಟಕದ ಇಡೀ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಆವರಿಸಿ ಇಂದು ಆಗುತ್ತಿರುವ ಪ್ರಮಾದಗಳಿಗೆ ಸಾಕ್ಷಿಯಾಗುತ್ತಿದೆ. ಈಟಿವಿ ಶುರುವಾದಾಗ ಕನ್ನಡಪ್ರಭ, ಪ್ರಜಾವಾಣಿಯಂಥಹ ಪತ್ರಿಕೆಗಳಲ್ಲಿ ಕೆಲಸ ಮಾಡಿ, ಭಾಷಾಂತರ ಮಾಡಿ, ವರಿದಗಾರಿಕೆ ಮಾಡಿ ನುರಿತಂಥವರು ಹೈದ್ರಾಬಾದ್ಗೆ ಹೋಗಲು ಮನಸ್ಸು ಮಾಡಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದರೆ ಇಲ್ಲಿನ ಎಲೆಕ್ಟ್ರಾನಿಕ್ ಮಾಧ್ಯಮಗಳ ಚಹರೆಯೇ ಬದಲಾಗುತ್ತಿತ್ತೆನೋ….ಆದರೆ ಹಾಗಾಗಲಿಲ್ಲ. ಅಲ್ಲಿಗೆ ಹೋದವರು ಹಾಳುರಿಗೆ ಉಳಿದ ಗೌಡರಂತಾದರು. ಅವರಲ್ಲಿಯೇ ಒಬ್ಬರನ್ನು ಚಾನೆಲ್ನ ಮುಖ್ಯಸ್ಥರನ್ನಾಗಿಸಲಾಯಿತು. ಮತ್ತೊಬ್ಬರನ್ನು ಸುದ್ದಿ ವಿಭಾಗಕ್ಕೆ ನೇಮಿಸಲಾಯಿತು. ಮತ್ತೊಬ್ಬರು ಆಂಕರ್ಗಳ ಮುಖ್ಯಸ್ಥರಾದರು. ಈ ಹಿಂದೆ ಆದ ಒಂದು ಪ್ರಮಾದ ಈಗ ಎಲ್ಲಾ ಚಾನೆಲ್ಗಳಲ್ಲಿ ಕಾಣಿಸುತ್ತಿದೆ ಎಂದೇ ಹೇಳಬಹುದು. ಹೀಗೆ ಈಟಿವಿಯಿಂದ ವಲಸೆ ಬಂದ ಒಬ್ಬೊಬ್ಬರು ಒಂದೊಂದು ಟೀಂ ಕಟ್ಟಿಕೊಂಡರು. ಈ ಟೀಂಗಳೇ ಈಗ ಬಹುತೇಕ ಚಾನೆಲ್ಗಳಲ್ಲಿ ಕೆಲಸ ಮಾಡುತ್ತಿವೆ, ಆದ್ದರಿಂಲೇ ಈ ಪ್ರಮಾದಗಳ ಸರತಿ.
ಒಂದು ಹೊಸ ಚಾನೆಲ್ ಶುರುವಾದರೆ ಈ ಟೀಂಗಳಲ್ಲಿಯೇ ಒಂದು ಸುದ್ದಿ ವಿಭಾಗದ ನೇತೃತ್ವ ವಹಿಸಿಕೊಳ್ಳುತ್ತದೆ. ಈ ಟೀಂಗೆ ಜೀ ಹುಜೂರ್ ಎನ್ನುವವರನ್ನು ಮಾತ್ರ ಆ ಚಾನೆಲ್ಗೆ ಸೇರಿಸಿಕೊಳ್ಳಲಾಗುತ್ತದೆ. ಬಹುತೇಕ ನೀವು ನೋಡಿ ಎಲ್ಲಾ ಚಾನೆಲ್ಗಳ ಜಿಲ್ಲಾ ವರದಿಗಾರರು, ಸುದ್ದಿ ವಿಭಾಗದಲ್ಲಿ ಕೆಲಸ ಮಾಡುವವರು ಹೀಗೆ ಜೀ ಹುಜೂರ್ ಎಂದು ನೇಮಕಗೊಂಡವರೇ. ನೀವು ಯಾವುದಾದರೂ ಹೊಸ ಚಾನೆಲ್ನವರು ಜಾಹಿರಾತು ನೀಡಿ, ಪರೀಕ್ಷೆ ನಡೆಸಿ, ಪ್ರತಿಭೆಗೆ ತಕ್ಕಂತೆ ನಿಸ್ಪಕ್ಷಪಾತವಾಗಿ ಅಭ್ಯಥರ್ಿಗಳನ್ನು ನೇಮಕ ಮಾಡಿಕೊಂಡಿದ್ದನ್ನು ನಾನು ನೋಡಿಲ್ಲ. ಎಲ್ಲರೂ ಒಂದೊಂದು ಗುಂಪಿಗೆ ಸೇರಿದವರೇ. “ಎ” ಎಂಬ ವ್ಯಕ್ತಿ ಒಂದು ಗುಂಪಿಗೆ ಸೇರಿದ್ದರೆ ಸಾಕು ಆತನನ್ನು ನೇಮಕವಾದ ಮೂರೇ ದಿನಕ್ಕೆ ಸ್ಕ್ರಾಲ್ ನ್ಯೂಸ್ಗೆ ಹಾಕುತ್ತಾರೆ. ಅವನಿಗೆ ಬ್ರೇಕಿಂಗ್ ಯಾವುದು, ಫ್ಲಾಷ್ ಯಾವುದು, ಜಸ್ಟ್ ಇನ್ ಯಾವುದು ಹೀಗೆ ಏನೊಂದು ಗೊತ್ತಿರುವುದಿಲ್ಲ. ಜಿಲ್ಲೆಗಳಲ್ಲಿ ಚಾನೆಲ್ ಸೇರಿದ ಮೂರು ದಿನಕ್ಕೆ ಅವನು ಜಿಲ್ಲಾ ವರದಿಗಾರನಾಗುತ್ತಾನೆ. ಬೆಂಗಳೂರಿನಲ್ಲಿ ಚಾನೆಲ್ ಸೇರಿದ 15 ದಿನಕ್ಕೆ ಟಿವಿ ಪರದೆ ಮೇಲೆ ಆಂಕರ್ಗಳಾಗುತ್ತಾರೆ. ಎಲ್ಲವೂ ಗುಂಪುಗಾರಿಕೆಯ ಫಲ. ಆದ್ದರಿಂದಲೇ ಇಂಥಹ ಬ್ರೀಡ್ಗಳಿಂದಲೇ ಈ ಎಲ್ಲಾ ಅವಾಂತರಗಳು. ಸುದ್ದಿಕೊಟ್ಟವನಿಗೂ ಗೊತ್ತಿರುವುದಿಲ್ಲ. ಹಾಕುವವನಿಗೂ ಅದೇನೆಂದು ಗೊತ್ತಾಗುವುದಿಲ್ಲ. ಇತ್ತ ಮುಖ್ಯಸ್ಥನಿಗೂ ಸಾರ್ವಜನಿಕ ಹಿತಾಸಕ್ತಿ ಏನೆಂದು ಅರಿವಾಗುವುದಿಲ್ಲ. ಆದ್ದರಿಂದಲೇ ಜನ ಐದು ನಿಮಿಷಕ್ಕೊಂದು ಬ್ರೇಕಿಂಗ್ ನ್ಯೂಸ್ ನೋಡುವುದು.
ಸಮೂಹ ಮಾಧ್ಯಮದ ತಾಕತ್ತು, ಜವಾಬ್ದಾರಿ ಏನೆಂದು ಅರಿಯದವರು ಇಂದು ಚಾನೆಲ್ಗಳ ಮುಖ್ಯಸ್ಥರಾಗಿರುವುದರಿಂದಲೇ ಈ ಪ್ರಮಾದಗಳ ಸೃಷ್ಟಿ. ಯಾವ ಚಾನೆಲ್ನ ಮುಖ್ಯಸ್ಥ ವರದಿಗಾರಿಕೆ ವಿಭಾಗವನ್ನು ವಿಷಯಗಳ ಅಧ್ಯಯನಕ್ಕೆ, ಹುಡುಕಾಟಕ್ಕೆ ಹಚ್ಚುವುದಿಲ್ಲವೋ, ಯಾವ ಸುದ್ದಿ ವಿಭಾಗವನ್ನು ಸುದ್ದಿಯ ಆಳ, ಉದ್ದ, ಅಗಲ ಅರಿಯಲು ಪ್ರೇರೆಪಿಸುವುದಿಲ್ಲವೋ ಆಗ ಸುದ್ದಿಗಳ ಜಿನುಗು, ಉದ್ಭವ ಬತ್ತುವುದಿಲ್ಲ. ಯಾವಾಗ ಈ ಕೆಲಸ ಆಗುವುದಿಲ್ಲವೋ, ಆಗ ವರದಿಗಾರರು ಪ್ರೆಸ್ಮೀಟ್ಗೆ ಹೋಗಿ ಹೇಳಿದ್ದನ್ನು ಬರೆದುಕೊಂಡು ಬರುತ್ತಾರೆ. ಅಲ್ಲಿಂದಲೇ ಕ್ಯಾಸೆಟ್ ಕಳುಹಿಸಿ ನೀವೇ ಸುದ್ದಿ ಬರೆದುಕೊಳ್ಳುವಂತೆ ಸುದ್ದಿ ವಿಭಾಗದವರಿಗೆ ಸೂಚಿಸುತ್ತಾರೆ. ನಿನ್ನೆ ಮೊನ್ನೆ ಚಾನೆಲ್ಗೆ ಬಂದವನೊಬ್ಬ ಕ್ಯಾಸೆಟ್ಗೆ ಹೆಡ್ಪೋನ್ ಹಾಕಿ ಕೇಳಿಸಿಕೊಂಡು ಮತ್ತೇನನ್ನೋ ಬ್ರೇಕಿಂಗ್ ಕೊಟ್ಟುಬಿಡುತ್ತಾನೆ. ಸುದ್ದಿ ಸೋಸುವ ಬದಲು ಸೋರಿಸಿ ಜನರಿಗೆ ಮತ್ತೇನನ್ನೋ ತಲುಪಿಬಿಡುತ್ತಾನೆ. ಆಗಲೇ ಉದ್ಘಾಟನೆ, ಬಿದ್ದಿದ್ದು, ಪೂಜೆ ಮಾಡಿದ್ದು, ಮುಖ ನೋಡಿದ್ದು, ಎದುರು ಬದುರಾಗಿದ್ದು ಬ್ರೇಕಿಂಗ್ ಆಗಿಬಿಡುತ್ತದೆ. ಇದನ್ನು ಸುದ್ದಿ ಮುಖ್ಯಸ್ಥರಿಗೆ ಗೊತ್ತಾಗುವುದು ನಿಮ್ಮಂಥವರು ಬೈಯ್ದಾಗಲೇ.
ಬಹುತೇಕ ನೋಡಿ ಜಿಲ್ಲಾ ಕೇಂದ್ರಗಳಿಂದ ಒಂದೇ ತೆರನಾದ, ಒಂದೇ ಸಮಯಕ್ಕೆ ಎಲ್ಲಾ ಸುದ್ದಿಗಳು ಬ್ರೇಕ್ ಆಗುತ್ತವೆ. ಕಾರಣ ಇಷ್ಟೇ. ಎಲ್ಲಾ ಚಾನೆಲ್ನ ವರದಿಗಾರರು ಒಪ್ಪಂದದ ವರದಿಗಾರಿಕೆ ಮಾಡತೊಡಗಿದ್ದಾರೆ ಈಗ. ಒಂದು ಕಾರ್ಯಕ್ರಮಕ್ಕೆ ಒಬ್ಬನೇ ವರದಿಗಾರ, ಕ್ಯಾಮರಾಮನ್ ಹೋಗಿ ಅವನು ಕೊಟ್ಟಿದ್ದನ್ನು ಇತರರು ಕಾಪಿ ಮಾಡುತ್ತಾರೆ. ಇದರಿಂದಲೆ ಏಕಕಾಲಕ್ಕೆ ಎಲ್ಲಾ ಚಾನೆಲ್ಗಳಲ್ಲಿ ಸುದ್ದಿಗಳು ಬ್ರೇಕ್ ಆಗುತ್ತವೆ. ಹಾಗೆಯೇ ಸತ್ತುಹೋಗುತ್ತವೆ. ಜಿಲ್ಲಾ ಕೇಂದ್ರಗಳಲ್ಲಿ ಸ್ವಂತಿಕೆಯಿಂದ ಕೆಲಸ ಮಾಡುವವರನ್ನು ಸೂಕ್ಷ್ಮ ದರ್ಶಕ ಹಾಕಿ ಹುಡುಕಾಡಬೇಕಾಗಿದೆ. ಯಾರಿಗೆ ಯಾವುದು ಸಾರ್ವಜನಿಕ ಹಿತಾಸಕ್ತಿ ಇರುವ ಸುದ್ದಿ, ಅವರ ಪರಿಣಾಮಗಳು, ಆ ಸುದ್ದಿಗೆ ಇರುವ ಶಕ್ತಿ, ತಾಕತ್ತು ಅರಿಯದೇ ವರದಿ ಮಾಡುವುದರಿಂದಲೇ ಬ್ರೇಕಿಂಗ್ ನ್ಯೂಸ್ ಹಾವಳಿ ಹೆಚ್ಚಾಗಿದೆ. ಇಲ್ಲದಿದ್ದರೆ ಇತರ ಸುದ್ದಿಗಳೂ ಹೆಚ್ಚಾಗುತ್ತಿದ್ದವು. ಕತೆ, ಕವನ ಬರೆಯುವುದನ್ನು ಬಿಟ್ಟು ಸುದ್ದಿ ಹೇಳುವ, ಸುದ್ದಿಯ ಅಧ್ಯಯನ, ಅದರ ಆಳ ಅಗಲ ವಿಸ್ತಾರವನ್ನು ಶೋಧಿಸಿ ಜನರಿಗೆ ತಲುಪಿಸುವ ಕೆಲವನ್ನು ಮುಖ್ಯಸ್ಥರು ಮಾಡಿದರೆ ಸುದ್ದಿಗೆ ಬರ ಇರುವುದಿಲ್ಲ. ಆಗ ಕೆಟ್ಟದ್ದು ಆಗುವುದನ್ನು ಕಾಯ್ದು ಕುಳಿತುಕೊಳ್ಳುವ ಸರದಿ ಪತ್ರಕರ್ತರಿಗೆ ಬರುವುದಿಲ್ಲ. ಎಲ್ಲಿ ಸುದ್ದಿ ಹುಡುಕಾಟ ನಿಂತಿರುತ್ತದೆಯೋ, ಎಲ್ಲಿ ಸುದ್ದಿ ತೆಗೆಯುವವರ ಚಲಶೀಲತೆ ಸ್ಥಗಿತಗೊಂಡಿರುತ್ತದೋ ಆಗ ಮಾತ್ರ “ಪತ್ರಕರ್ತರು ಯಾಕೆ ಹೀಗೆ ಅಂದ್ರೆ ಅವರು ಹೀಗೇನೇ”…..ಆಗುತ್ತದೆ.

























































































































































































































































































































































































































































































































































































































































































































































































































































































































































































































![bmicp_1[1]](http://mncworld.files.wordpress.com/2010/08/bmicp_11.jpg?w=460)




































































































































































































![Lazy Lass [eXPLoReD] Lazy Lass [eXPLoReD]](http://static.flickr.com/7083/7272226034_3d95aba441_t.jpg)