Devegowda- Chennigappa meets


ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಬಾಯಿಗೆ ಬಂದಂತೆ ಬಹಿರಂಗವಾಗಿ ಬೈಯ್ದು ಬಿಜೆಪಿ ಸೇರಿದ್ದ ಮಾಜಿ ಸಚಿವ ಸಿ. ಚನ್ನಿಗಪ್ಪ ಇಂದು ದೇವೇಗೌಡರನ್ನು ದಿಢೀರನೆ ಬೆಂಗಳೂರಿನಲ್ಲಿ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಹಾವು- ಮುಂಗುಸಿಯಂತಾಗಿದ್ದ ದೇವೇಗೌಡರು ಹಾಗೂ ಚೆನ್ನಿಗಪ್ಪನವರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸದ್ಯ ಬಿಜೆಪಿಯಲ್ಲಿರುವ ಚೆನ್ನಿಗಪ್ಪ, ತಮ್ಮ ಮಗ ಗೌರಿ ಶಂಕರ್ ಜತೆ ಜೆಡಿಎಸ್ ಸೇರುವರೆಂಬ ವದಂದತಿಗಳಿಗೆ ಮತ್ತೆ ಈಗ ರೆಕ್ಕೆ ಪುಕ್ಕ ಬಂದಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೆನ್ನಿಗಪ್ಪ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಆರ್.ಎಲ್. ಜಾಲಪ್ಪ ಪುತ್ರ ಜೆ. ನಾರಾಯಣಸ್ವಾಮಿ ವಿರುದ್ಧ ಸ್ಪಧರ್ಿಸಿ ಸೋಲನ್ನನುಭವಿಸಿದ್ದರು. ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರ ಪುತ್ರ ಗೌರಿಶಂಕರ್ ಆಪರೇಷನ್ ಕಮಲ ಕಾಯರ್ಾಚರಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ಆನಂತರ ನಡೆದ ಉಪ ಚುನಾವಣೆಯಲ್ಲಿ ಗೌಡರ ಸೊಸೆ ಅನಿತಾ ಕುಮಾರಸ್ವಾಮಿ, ಗೌರಿಶಂಕರ್ರನ್ನು ಸೋಲಿಸಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು.

  • ಪುಟಗಳು

  • Flickr Photos

  • ಏಪ್ರಿಲ್ 2024
    ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
     123456
    78910111213
    14151617181920
    21222324252627
    282930  
  • ವಿಭಾಗಗಳು