ಕೆಐಎಡಿಬಿ ಮೂಲಕ ನೈಸ್ ಕಂಪನಿ ಮಾಡುತ್ತಿರುವ ದಬ್ಬಾಳಿಕೆ ಮುಂದುವರೆದಿದ್ದು ಬೆಂಗಳೂರಿನ ಪಿಇಎಸ್ ಕಾಲೇಜಿನ ಬಳಿ ಖಾಸಗಿ ವ್ಯಕ್ತಿಯೊಬ್ಬರ ಜಮೀನನನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ವಿಚಾರಿಸಲು ಹೋದ ಭೂಮಿಯ ಮಾಲೀಕರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ದಬ್ಬಾಳಿಕೆ ನಡೆಸಲಾಗಿದೆ. ಜಮೀನು ಇಲ್ಲಾ, ಪರಿಹಾರವೂ ಇಲ್ಲದೇ ಒದ್ದಾಡುತ್ತಿರುವ ರೈತ ಕುಟುಂಬ ಈಗ ಜೀವ ಬೆದರಿಕೆಯಿಂದ ಬದುಕಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ.
ನೈಸ್ ಸಂಸ್ಥೆ ಬೆಂಗಳೂರು ಸುತ್ತ ನಿಮರ್ಿಸುತ್ತಿರುವ ಪೆರಿಫೆರಲ್ ರಿಂಗ್ ರಸ್ತೆ ನಿಮರ್ಾಣದ ಸಂದರ್ಭದಲ್ಲಿ ಆರ್ ಅಂಡ್ ಆರ್ ಪ್ಯಾಕೇಜ್ನ್ನು ಜಾರಿಗೊಳಿಸಿ ಆ ಮೂಲಕವೇ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಬೇಕು. ಆವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. 10 ಕ್ಕಿಂತ ಹೆಚ್ಚು ಕುಟುಂಬಗಳಿದ್ದರೆ ಅವರಿಗೆ ಬೇರೆಕಡೆ ವಸತಿ ವ್ಯವಸ್ಥೆ ಮಾಡಿಕೊಟ್ಟು ಅವರನ್ನು ಸ್ಥಳಾಂತರಿಸಿದ ನಂತರ ಭೂಮಿಯನ್ನು ಕೆಐಎಡಿಬಿ ವಶಕ್ಕೆ ತೆಗೆದುಕೊಳ್ಳಬೇಕು. ಆನಂತರವೇ ನೈಸ್ ಸಂಸ್ಥೆಗೆ ಹಸ್ತಾಂತರಿಸಬೇಕೆಂದು 1995 ರಲ್ಲಿಯೇ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ ಆರ್ ಅಂಡ್ ಆರ್ ಫ್ಯಾಕೇಜ್, ನಿಯಮಗಳನ್ನು ಗಾಳಿಗೆ ತೂರಿ ಅದೆಷ್ಟು ರೈತರ ಭೂಮಿ ಕೆಐಎಡಿಬಿ ಮೂಲಕ ನೈಸ್ ಪಾಲಾಯಿತು ಎಂಬುದಕ್ಕೆ ಲೆಕ್ಕವಿಲ್ಲ. ಹೀಗೆ ಯಾವುದೇ ನಿಯಮಗಳನ್ನು ಪಾಲಿಸದೇ ಕೆಐಎಡಿಬಿ ರೈತರ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿರುವುದಕ್ಕೆ ತಾಜಾ ಉದಾಹರಣೆ ಬಾಬುರೆಡ್ಡಿ ಅವರದು. ಇವರ 40 ಕೋಟಿ ರುಪಾಯಿ ಬೆಲೆ ಬಾಳುವ 7 ಗುಂಟೆ ಜಮೀನು ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿಪ್ರೋ ಕಚೇರಿ ನಡುವೆ ಬರುತ್ತದೆ. ಇವರಿಗೆ ನೋಟಿಸು ನೀಡದೆ, ಪರಿಹಾರ ವಿತರಿಸದೇ ಕೆಐಎಡಿಬಿ ಇವರ ಜಮೀನನ್ನು ಬಲವಂತವಾಗಿ ಕಿತ್ತುಕೊಂಡಿದೆ. ಬೈಟ್: ಬಾಬುರೆಡ್ಡಿ, ರೈತ, ದೊಡ್ಡತೋಗೂರು ಟಿಸಿಆರ್ ಕ್ಲಿಪ್: ಪಿಇಎಸ್ ಕಾಲೇಜು ಹಾಗೂ ವಿಪ್ರೋ ಕಂಪನಿಗಳನ್ನು ಬಿಟ್ಟು, ಮಧ್ಯದಲ್ಲಿರುವ ನಮ್ಮ ಭೂಮಿಯನ್ನಷ್ಟೇ ಕೆಐಎಡಿಬಿ ಏಕೆ ವಶಪಡಿಸಿಕೊಂಡಿದೆ ಎಂಬುದು ಬಾಬುರೆಡ್ಡಿ ಅವರ ತಕರಾರು. ಭೂಮಿ ವಶಪಡಿಸಿಕೊಳ್ಳುವುದನ್ನು ತಡೆಯಲು ಹೋದ ದಂಪತಿಗಳ ವಿರುದ್ಧ ಈಗ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೈಟ್: ಬಾಬು ರೆಡ್ಡಿ ಪತ್ನಿ, ಟಿಸಿಆರ್: ಪೊಲೀಸರ ಸರ್ಪಗಾವಲಿನಲ್ಲಿ ಕೆಐಎಡಿಬಿ ಅಧಿಕಾರಿಗಳು ನಿಂತು ತಮ್ಮ ಭೂಮಿ ವಶಪಡಿಸಿಕೊಳ್ಳುವುದನ್ನು ಚಿತ್ರೀಕರಿಸಿಕೊಂಡಿರುವ ದಂಪತಿ ಈಗ ನ್ಯಾಯಕ್ಕಾಗಿ ಹೈಕೋರ್ಟ ಮೆಟ್ಟಿಲು ಏರಿದ್ದಾರೆ. ಆದರೆ ನೂರಾರು ಕೇಸುಗಳನ್ನು ಗೆದ್ದು ಪೆರಿಫರಲ್ ರಸ್ತೆ ನಿಮರ್ಿಸಿರುವ ಅಶೋಕ್ ಖೇಣಿಗೆ ಇವರು ಸವಾಲು ಒಡ್ಡಬಲ್ಲರೇ ಎಂಬುದು ಈಗ ಕುತೂಹಲದ ಪ್ರಶ್ನೆ. ಭೂಮಿಯೂ ಇಲ್ಲಾ, ಪರಿಹಾರವೂ ಇಲ್ಲಾ. ಆದರೆ ಕ್ರಿಮಿನಲ್ ಕೇಸ್ನ್ನು ಹಾಕಿಸಿಕೊಂಡಿರುವ ಬಾಬುರೆಡ್ಡಿ ದಂಪತಿಯ ಬೆಂಬಲಕ್ಕೆ ನಿಲ್ಲುವವರು ಯಾರು? ನ್ಯಾಯಾಲಯವಾದರೂ ಅವರ ಬೆಂಬಲಕ್ಕೆ ನಿಲ್ಲಿವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.