ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್: ಬಜೆಟ್ ಡೇಟ್: 14-01-2011 ಬೆಂಗಳೂರು ಆಂಕರ್: ಫೆಬ್ರವರಿ ಕಡೆಯ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಆದರೆ ಬಜೆಟ್ ಮಂಡನೆ ಮಾರ್ಚ ಬಿಟ್ಟು ಫೆಬ್ರವರಿಯಲ್ಲೇ ಏಕೆ ಎಂಬ ಚಚರ್ೆ ಈಗ ರಾಜಕೀಯ ವಲಯದಲ್ಲಿ. ಸಕರ್ಾರದ ಈ ತರಾತುರಿ ಕ್ರಮದ ಹಿಂದಿರುವ ಲೆಕ್ಕಾಚಾರಗಳ ಬಗ್ಗೆ ಇಲ್ಲಿದೆ ವರದಿ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1: ಸಕರ್ಾರಕ್ಕೆ ಈಗ ಎಲ್ಲಾ ಮಗ್ಗಲುಗಳಿಂದ ಹೊಡೆತ ಬೀಳಲಾರಂಭಿಸಿದೆ. ಒಂದು ಕಡೆ ಲಾಯರ್ಸ್ ಫೋರಂ ರಾಜ್ಯಪಾಲರ ಮುಂದೆ ಸಲ್ಲಸಿರುವ ಅಜರ್ಿ ಬಾಕಿ ಇದೆ. ಮತ್ತೊಂದು ಕಡೆ ಹೈಕೋರ್ಟನಲ್ಲಿ ಅನರ್ಹಗೊಂಡಿರುವ ಪಕ್ಷೇತರ ಶಾಸಕರ ಅಜರ್ಿ ಶೀಘ್ರವೇ ಇತ್ಯರ್ಥವಾಗುವ ಸಾಧ್ಯತೆ ಇದೆ. ಮತ್ತೊಂದು ಕಡೆ ಸುಪ್ರಿಂಕೋರ್ಟನಲ್ಲಿ ಅನರ್ಹಗೊಂಡಿರುವ ಬಿಜೆಪಿ ಶಾಸಕರ ತೀಪರ್ು ಜನವರಿಯಲ್ಲೇ ಹೊರಬೀಳುವ ಎಲ್ಲಾ ಲಕ್ಷಣಗಳಿವೆ. ಇನ್ನೊಂದು ಕಡೆ ಹೈಕೋರ್ಟ, ನ್ಯಾಯಮೂತರ್ಿ ಪದ್ಮರಾಜ್ ಆಯೋಗದ ತನಿಖೆಗೆ ತಡೆಯಾಜ್ಞೆ ನೀಡಿದೆ. ಲೋಕಾಯುಕ್ತರು ಭೂಹಗರಣಗಳ ತನಿಖೆ ಮುಂದುವರೆಸಿದ್ದಾರೆ. ಹೀಗೆ ಬಿಜೆಪಿ ಸಕರ್ಾರ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನು ಎದುರಿಸುವ ಸನ್ನಿವೇಶ ನಿಮರ್ಾಣವಾಗಿದೆ. ಯಾವ ಗಳಿಗೆಯಲ್ಲಿ ಏನುಬೇಕಾದರೂ ಆಗಬಹುದು ಎಂಬ ವಾತಾವರಣ ಸೃಷ್ಟಿಯಾಗಿದೆ. ಒಂದು ವೇಳೆ ರಾಜ್ಯಪಾಲರು, ಮುಖ್ಯಮಂತ್ರಿಗಳ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿದರೆ, ಅನರ್ಹಗೊಂಡಿರುವ ಶಾಸಕರ ಪರ ತೀಪರ್ು ಬಂದರೆ, ಲೋಕಾಯುಕ್ತರು ತನಿಖೆ ಮುಂದುವರೆಸಿ ಎಫ್ಐಆರ್ ದಾಖಲಿಸಿದರೆ ಮುಖ್ಯಮಂತ್ರಿಗಳು ಜತೆಗೆ ಅವರ ಸಕರ್ಾರ ಅಪಾಯಕ್ಕೆ ಸಿಕ್ಕಿ ಬೀಳುತ್ತದೆ. ಇಂಥಹ ಅಪಾಯಗಳು ಎದುರಾಗುವ ಮುನ್ನವೇ ತರಾತುರಿಯಲ್ಲಿ ಬಜೆಟ್ ಮಂಡಿಸಲು ಮುಖ್ಯಮಂತ್ರಿಗಳು ಮುಂದಾಲೋಚನೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಇನ್ನೊಂದು ಲೆಕ್ಕಾಚಾರದ ಪ್ರಕಾರ, ಒಂದು ವೇಳೆ ಯುಪಿಎ ಸಕರ್ಾರ ಕೇಂದ್ರದ ಬಜೆಟ್ ಮಂಡನೆ ನಂತರ ಲೋಕಸಭೆಯನ್ನು ವಿಸಜರ್ಿಸಿ ಸಾರ್ವತ್ರಿಕ ಚುನಾವಣೆ ಘೋಷಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆ ವಿಸಜರ್ಿಸಲು ತರಾತುರಿ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಾರೆಂದು ಬಣ್ಣಿಸಲಾಗುತ್ತಿದೆ. ಬಿಜೆಪಿ ಹೈಕಮಾಂಡ್ ಸಹ ಬಜೆಟ್ ಮಂಡಿಸಿ ಕುಚರ್ಿ ತ್ಯಜಿಸಿ ಎಂದು ಗುಟ್ಟಿನಲ್ಲಿ ಹೇಳಿರುವ ಸಾಧ್ಯತೆಯೂ ಇರುವುದರಿಂದ ಫೆಬ್ರವರಿಯಲ್ಲಿ ಆಯವ್ಯಯ ಮಂಡನೆಯಾಗುತ್ತಿವುದಕ್ಕೆ ರೆಕ್ಕೆಪುಕ್ಕ ಬಂದಿದೆ. ಒಟ್ಟಿನಲ್ಲಿ ಬಜೆಟ್ ಮಂಡನೆ ಹಿಂದೆ ರಾಜಕೀಯ ಲೆಕ್ಕಾಚಾರವೇ ಕಾಣುತ್ತಿದೆ. –ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು